ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jan 7, 2011

ಕ್ಷಮೆ ಮತ್ತು ಕಾರಣ ಮತ್ತು ಮತ್ತೊಂದು ....

2 ಪ್ರತಿಕ್ರಿಯೆಗಳು
ಸ್ಪರ್ಧಾರ್ಥಿಯ ಓದುಗರಿಗೆ ಕ್ಷಮೆ ಕೇಳಿ ; ಕ್ಷೇಮ ಸಮಾಚಾರ ಕೇಳುತ್ತಾ ...

ಕೆಲವು ದಿನಗಳಿಂದ ನಿಮ್ಮೊಂದಿಗೆ ಜ್ಞಾನವನ್ನ ಹಂಚಿಕೊಳ್ಳದೇ ಇರಲು ಕಾರಣವನ್ನರಹುತ್ತಿದ್ದೇನೆ.

ಕಾರಣ : ಪ್ರತಿ ದಿನ ಸಂಜೆ ಮನೆ ತಲುಪಿದ ನಂತರ ನನ್ನ ಸಂಗಾತಿಯಾಗಿದ್ದ ಕಂಪ್ಯೂಟರ್ ನನ್ನ ಮೇಲೆ ಮುನಿಸಿಕೊಂಡಿದ್ದು ON ಆಗಲು ನಿರಾಕರಿಸುತ್ತಿದೆ. ಕಂಪ್ಯೂಟರ್ ON ಆದ ಕೂಡಲೇ ನಿಮಗೆ ಜ್ಞಾನ ಹಂಚುವ ಕೆಲಸ ಪ್ರಾರಂಭ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ.

ಈಗ ಮತ್ತೊಂದು ಸಮಾಚಾರ ಹೇಳುತ್ತೇನೆ. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸ್ಪರ್ಧಾರ್ಥಿಯ ಹುಡುಗ ಆಯ್ಕೆಯಾಗಿದ್ದು, ಜನವರಿ 15ರಿಂದ ಹಳ್ಳಿವಾಸ ಆರಂಭವಾಗಲಿದೆ. Always Connected ಸ್ಥಿತಿಯಿಂದ Never Connected ಸ್ಥಿತಿಗೆ ತೆರಳುತ್ತಿದ್ದಾನೆ. ಹೀಗಾಗಿ ಸ್ವಲ್ಪ ದಿನ ಅಲ್ಲಿನ ಪರಿಸರಕ್ಕೆ ಹೊಂದಾಣಿಕೆ ಆಗುವ ತನಕ ಸ್ಪರ್ಧಾರ್ಥಿ ತಾಣದಲ್ಲಿ ಹೊಸ ಬರಹಗಳು ಬರದೇ ಇರಬಹುದು. ಆ ಸ್ವಲ್ಪ ದಿನ ಸ್ಪರ್ಧಾರ್ಥಿಗಳು ಸಹಕರಿಸಬೇಕೆಂದು ಮನವಿ ಕೂಡ ಮಾಡಿದ್ದಾನೆ.

ಪಂಚಾಯತ್ ಅಭಿವೃದ್ಧಿ ಅದಿಕಾರಿ ಹುದ್ದೆಯಲ್ಲಿ ನೂರಾ ಎಂಟು ತಲೆನೋವುಗಳಿದ್ದರೂ ಧೈರ್ಯ ಮಾಡಿ ಹೋಗ್ತಿದಾನೆ, ಸ್ಪರ್ಧಾರ್ಥಿ ಓದುಗರೆಲ್ಲರ ಶುಭೇಚ್ಛೆ ಇರಲಿ.

ಮತ್ತೆ ಶೀಘ್ರದಲ್ಲೇ ನಿಮ್ಮ ಜೊತೆ ಜ್ಞಾನ ಹಂಚಿಕೊಳ್ಳುವ ಉತ್ಸುಕತೆಯಲ್ಲಿ,

 
:   ಸ್ಪರ್ಧಾರ್ಥಿ

Jan 2, 2011

ಗಣಕ ಪದಕೋಶ - 22 : ಟ್ವಿಟರೇಚರ್(Twitterature)

2 ಪ್ರತಿಕ್ರಿಯೆಗಳು



ಟ್ವಿಟರೇಚರ್ ( twitterature ) : ಏನಿದು ಹೊಸ ಸಂಧಿವಾಕ್ಯ ಅಂತ ಹುಬ್ಬೇರಿಸಬೇಡಿ. ಇದು Twitter ಮತ್ತು Literature ಎರಡು ಶಬ್ದಗಳು ಸಂಕರಗೊಂಡಾಗ ಹುಟ್ಟಿದ ಶಬ್ದ. ಬರೀ ಶಬ್ದಗಳು ಮಾತ್ರವಲ್ಲ ಎರಡೂ ಶಬ್ದಗಳ ನಿಜೋದ್ದೇಶ ಈಡೇರುವ ಸಲುವಾಗಿ ಸೃಷ್ಟಿಯಾಗಿರುವ Tool, ತನ್ಮೂಲಕ ಶಬ್ದ.
ಟ್ವಿಟರ್ ಟೂಲ್ ನ ಧ್ಯೇಯ : 140 ಅಕ್ಷರಗಳಲ್ಲಿ  ನಿಮ್ಮ ಮನದ ಮಾತುಗಳನ್ನ ಪ್ರಸಾರ ಮಾಡುವುದು.  
ಸಾಹಿತ್ಯದ ಧ್ಯೇಯ : ಸಾಹಿತಿಯ ಮನದಲ್ಲಿ ಉದಿಸಿದ ಕಲ್ಪನಾ ವಿಲಾಸವನ್ನ ಬರವಣಿಗೆಯ ಮೂಲಕ ಓದುಗನಿಗೂ ತಲುಪುವ ಹಾಗೆ ಮಾಡುವ ಮೂಲಕ ಅವನಲ್ಲೂ ಅದೇ ವಿಲಾಸ ಲೋಕಕ್ಕೆ ಕರೆದೊಯ್ಯುವುದು.

    ಈ ಎರಡು ಧ್ಯೇಯಗಳನ್ನ ಸಂಕರಿಸಿ Twitterature ಅನ್ನ ಸೃಷ್ಟಿಸಲಾಗಿದೆ. ಒಂದು Advantage & ಒಂದು Disadvantage ಬಳಸಿಕೊಂಡು ಈ Tool ಸೃಷ್ಟಿಯಾಗಿದೆ.

    ಸಾಹಿತ್ಯ ಓದುಗರ ಸಂಖ್ಯೆ ಕ್ಷೀಣಗೊಳ್ಳುತ್ತಿರುವುದು ಈ ದಿನದ Disadvantage
    ಆಗಿದ್ದರೆ,
    ಹೆಚ್ಚೆಚ್ಚು ಜನ Twitter ನಂತಹ Social Network ತಾಣಗಳಿಗೆ ದಿನದ 24 ಗಂಟೆಯೂ ಅಂಟಿಕೊಂಡಿರುವುದು Advantage.

      ಹೀಗಾಗಿ ಸಾಹಿತ್ಯ ಲೋಕದ ಮಹಾನ್ ಕೃತಿಗಳನ್ನ Twitter ಮೂಲಕ ಜನರಿಗೆ ತಲುಪಿಸುವ ಯೋಜನೆಯೇ ಈ Twitterarure.

      " 
      Perhaps you once asked yourself, ‘What exactly is Hamlet trying to tell me? Why must he mince his words, muse in lyricism and, in short, whack about the shrub?’ No doubt such troubling questions would have been swiftly resolved were the Prince of Denmark a registered user on Twitter.com.
      This, in essence, is Twitterature.
      Here you will find over sixty of the greatest works of western literature – from Beowulf to Bronte, from Kafka to Kerouac, and from Dostoevsky to Dickens– each distilled through the voice of Twitter to its purest, pithiest essence. Including a full glossary of online acronyms and Twitterary terms to aid the amateur, Twitterature provides everything you need to master the literature of the civilised world, while relieving you of the burdensome task of reading it.
      ***
      ಹ್ಯಾಮ್ಲೆಟ್ ಓದುವಾಗ ನಿಮಗನಿಸಿರಬಹದು : " ಇಂಥ ಕಠಿಣ ಪದಗಳನ್ನ ಬಳಸಿ ಈ ಸಾಹಿತಿ ಏನೂ ಹೇಳೋಕೆ ಹೊರಟಿದಾನೆ ? ಹೇಳೋದನ್ನ ಸಾಮಾನ್ಯರಿಗೂ ತಿಳೀಯೋಹಾಗೆ ಸರಳ ಭಾಷೆಯಲ್ಲಿ ಹೇಳಿದ್ದರೆ ಇವನ ಗಂಟೇನು ಹೋಗ್ತಿತ್ತು ? " ಅಂತ. ಆವಾಗ ನಿಮಗನಿಸಿರಬಹುದು ಆ ಪಾತ್ರಧಾರಿ ಡೆನ್ಮಾರ್ಕ್ ರಾಜ Twitter.Com ನಲ್ಲಿ Account ಹೊಂದಿದ್ರೆ ಭಾಳ ಸರಳವಾಗಿ ತನ್ನ ಕಥೆ ಹೇಳ್ತಾ ಇದ್ದ ಅಂತ. ಅಲ್ಲಾ ?
      ಈ ಟ್ವಿಟರೇಚರ್ ನ ತಿರುಳು ಇರೋದೇ ಅಷ್ಟೇ : ಇಂಗ್ಲೀಷ್ ಸಾಹಿತ್ಯದ ಸುಮಾರು ಸುಪ್ರಸಿದ್ಧ ಕೃತಿಗಳನ್ನ ಟ್ವಿಟರ್ ಭಾಷೆಗೆ ಭಟ್ಟಿ ಇಳಿಸಿ, ಮೂಲ ಕೃತಿಯ ಆಶಯಕ್ಕೆ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಬಾರದ ಹಾಗೆ ಕೃತಿಯ ಬಗ್ಗೆ ಓದುಗರಿಗೆ ತಿಳಿಸಿಕೊಡುವುದು.

      "
      ------


      ಅಂದಹಾಗೆ ಈ Twitterature ಎಂಬುದು ಪುಸ್ತಕದ ಹೆಸರು ?!!!! ಅಂದರೆ ಮೇಲಿನ ಪ್ಯಾರಾದಲ್ಲಿ ಇದೊಂದು Tool ಎಂದು ಹೇಳಿದ್ದು ಸುಮ್ನೆ Joke ಗೆ. ಇದು Twitter Tool ಅಲ್ಲ. ಬದಲಿಗೆ ಒಂದು ಪ್ತಸಕದ ಹೆಸರು !!!!!!!!!!!!! ಆದರೆ ಒಂದು ಸತ್ಯ : ಆ ಪುಸ್ತಕದಲ್ಲಿನ ಸಾಹಿತ್ಯದ Tweet ರೂಪಾಂತರಗಳು Twitter ತಾಣದಲ್ಲಿ ಹರಿದಾಡಿದರೆ ಅದೇ Twitterature Tool ಅಲ್ಲವೇ ?!

      ಪುಸ್ತಕದ ಪೂರ್ತಿ ಹೆಸರು :
      Twitterature: The World’s Greatest Books, Retold Through Twitter (Now Presented in Twenty Tweets or Less.)

      ಪೆಂಗ್ವಿನ್ ಪ್ರಕಾಶನದವರು ಪ್ರಕಟಿಸಿರುವ ಈ ಪುಸ್ತಕದಲ್ಲಿ ಜಗತ್ತಿನ ಸುಮಾರು 60 ಮಹಾನ್ ಕೃತಿಗಳನ್ನ Twitter ಭಾಷೆಯಲ್ಲಿ ಬರೆಯಲಾಗಿದೆ. Alexander Aciman and Emmett Rensin ಎಂಬ ಇಬ್ಬರು ಶಿಕಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಹಸ ಮಾಡಿದ್ದಾರೆ.

      ಆದರೆ,

      ಈ ಪುಸ್ತಕದ ಮೂಲಕ ನಾವಿಂದು ಹೊಸದೊಂದು ಜಗತ್ತಿಗೆ ತರೆದುಕೊಳ್ಳುತ್ತೇವೆ. ಅದೇ Micro Fiction. ಅಂದರೆ Twitter ನ MicroBlogging ಬಳಸಿ ಸಾಹಿತ್ಯ ಕೃಷಿಗೆ ತೊಡಗುವುದು. ಇದು ಈಗಾಗಲೇ ಆರಂಭವಾಗಿದೆ ಕೂಡ. ಜೇಮ್ಸ್ ಬ್ರಿಡಲ್ ಎಂಬ ಪುಸ್ತಕ ಲೋಕದ ವ್ಯಕ್ತಿ ಹೊಸ ಪುಸ್ತಕ ಬರೆದಿದ್ದಾರೆ. ಅದರ ಹೆಸರು : My Life In Tweets. ಇದೊಂದು ಉದಾಹರಣೆ ಮಾತ್ರ ಇನ್ನೂ ಅನೇಕ ಕೃತಿಗಳು ಪ್ರಕಟವಾಗಿವೆ, ವಾಗುತ್ತಲಿವೆ.

      ಇಷ್ಟನ್ನ ತಿಳಿದುಕೊಂಡಾದ ನಂತರವೂ Twitterature ಬಗ್ಗೆ ನಿಮಗೆ ಏನೂ ತಿಳಿದಂತಾಗುವುದಿಲ್ಲ. ಕಾರಣ ಸಾಹಿತ್ಯದ ಭಾಷೆಯ ಅರಿವಿಲ್ಲದೆ ಸಾಹಿತ್ಯವನ್ನ ಅರಿಯುವುದು ಹೇಗೆ ? ಹೀಗಾಗಿ ಮೊದಲಿಗೆ ತಿಳಿಯಬೇಕಿರುವುದು ಟ್ವಿಟರ್ ಭಾಷಾ ಪ್ರಪಂಚವನ್ನ. ಅದನ್ನ ತಿಳಿದಾಗ ಮಾತ್ರ ಮೇಲಿನ ಸಾಹಿತ್ಯ ಸಾಹಸದ ನಿಜ ಕಷ್ಟ-ಸುಖ-ನೋವು-ನಲಿವು ಅರ್ಥವಾದೀತು !!! ಟ್ವಿಟರ್ ಭಾಷಾ ಪ್ರಪಂಚಕ್ಕೆ ಭೇಟಿ ನೀಡಲು ನಮ್ಮ ಕಳೆದ ವಾರದ ಗಣಕ ಪದಕೋಶದಲ್ಲಿ ಮೂಡಿ ಬಂದ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ.


      : e-ಶ

      Jan 1, 2011

      ಈ ದಿನ ಹೊಸ ದಿನ

      0 ಪ್ರತಿಕ್ರಿಯೆಗಳು



      ಹೌದು. " ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಅಂಥ ವಿಶೇಷ ಪ್ರಾಮುಖ್ಯತೆ ಇಲ್ಲ. ಕಾರಣವೂ ಇಲ್ಲದೇ ಇಲ್ಲ. ಎಲ್ಲ ಪ್ರಾಚೀನ ಸಂಸ್ಕೃತಿಗಳಂತೆ ನಮ್ಮ ಸಂಸ್ಕೃತಿಯೂ ಪ್ರಕೃತಿಯೊಂದಿಗೆ ಒಡನಾಡುತ್ತಾ ಬೆಳೆದ ಸಂಸ್ಕೃತಿ. ಪ್ರಕೃತಿಯ ಪ್ರತಿ ನಲಿವು-ನೋವು-ಸಿಟ್ಟು-ಸೆಡವು ಎಲ್ಲವನ್ನೂ ನೋಡಿ-ಅನುಭವಿಸಿ ಅದರ ಆಜ್ಞೆಗಳಿಗೆ ಪಕ್ಕಾಗುತ್ತಾ ನಮ್ಮ ಸಂಸ್ಕೃತಿಯೂ ಪಕ್ಕಾಯಿತು. "  ಹೌದು ತಾನೇ ? ಸುಮ್ನೆ ನಾನು ಹೇಳ್ತೀನಿ ಅಂತ " ಹೂಂ " ಅನ್ಬೇಡಿ. ಈಗ ನೋಡಿ ನಿನ್ನೆ ನಮ್ಮ ಸ್ನೇಹಿತರು ಮೂರಂಶದ ಮಾಹಿತಿಯೊಂದನ್ನ ಕಳುಹಿಸಿದಾರೆ. ಅದು ಮೇಲಿನ ಉದ್ಘೋಷಕ್ಕೆ ಪೂರಕವಾಗಿದೆ. ಅದನ್ನ ಓದಿ ಆದ ಮೇಲೆ ನಿಮ್ಮದೇ ಆದ ನಿರ್ಧಾರಕ್ಕೆ ಬನ್ನಿ.



      ಹಾಗೆ
      ಹೀಗೆ
      ದಿನ ಬದಲಾವಣೆ
      ರಾತ್ರಿ 12 ಗಂಟೆಗೆ ದಿನ ಹೇಗೆ ಬದಲಾಗುತ್ತೆ ಸ್ವಾಮಿ ? ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾಗುತ್ತಾ ? ಇಲ್ಲ ತಾನೇ ? 11.59PM ಕ್ಕೂ ಕತ್ತಲೆ. 12.01AM ಕ್ಕೂ ಕತ್ತಲೆ !!!
      ದಿನದ ಬದಲಾವಣೆ ಆಗುವುದು ಕತ್ತಲು ಕಳೆದು ಬೆಳಕು ಮೂಡಿದಾಗ. ಸೂರ್ಯ 6 ಗಂಟೆಯ ಹೊತ್ತಿಗೆ ಮೂಡಿದರೆ ರಾತ್ರಿ 12 ಗಂಟೆಗೆ ಹೇಗೆ ದಿನ ಹೊಸತಾಯಿತು ?!
      ವರ್ಷ ಬದಲಾವಣೆ
      ಡಿಸೆಂಬರ್ 31 ಮತ್ತು ಜನವರಿ 1 : ಈ ಎರಡು ದಿನಗಳ ನಡುವೆ ಪ್ರಕೃತಿಗೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಬರೀ ಈ ಎರಡು ದಿನ ಬೇಡ. ಸುತ್ತಲಿನ ಈ ಕಡೆ ಒಂದು ವಾರ ಆ ಕಡೆ ಒಂದು ವಾರ ಗಮನಿಸಿದರೂ ಯಾವ ವ್ಯತ್ಯಾಸವೂ ಇಲ್ಲ. ಮತ್ತೇಕೆ  ಡಿಸೆಂಬರ್ 31ರ ರಾತ್ರಿ ಕಳೆದರೆ ನಮಗೆ ಹೊಸ ವರ್ಷ ಧುತ್ತೆಂದು ಎದುರಾಗಬೇಕು ???
      ಆದರೆ ನಮ್ಮ ಯುಗಾದಿಯ ದಿನದ ಸುತ್ತಲಿನ ಪ್ರಕೃತಿಯ ಬದಲಾವಣೆಗಳನ್ನ ಗಮನಿಸಿ. ಎಲ್ಲೆಡೆ ಹೊಸ ಚಿಗುರು. ಜೊತೆಗೆ ಆಕಾಶಕಾಯಗಳ ಚಲನೆಯ ದಿಕ್ಕೂ ಬದಲಾಗುವ ಸಂಕ್ರಮಣ ಕಾಲವದು. ಹೊಸ ವರುಷವೆಂದರೆ ಹೊಸ ಕ್ಯಾಲೆಂಡರ್ ಎನ್ನುವ ಬದಲು ನಮ್ಮನ್ನ ಪೊರೆಯುತ್ತಿರುವ ಪ್ರಕೃತಿಯ ನಿತ್ಯವ್ಯಾಪಾರಗಳ ಹೊಸಲೆಕ್ಕ ಎಂದು ಬಗೆದರೆ ನನ್ನ ವಾದ ನಿಮಗೆ ಮನದಟ್ಟಾದಿತು.. ಆ ಸಂಕ್ರಮಣ ಕಾಲವೇ ನಮಗೆ ಹೊಸ ವರುಷ ತಾನೇ ?!!
      ಕ್ಯಾಲೆಂಡರ್
      ನೀವೀಗ ಹೇಳಬಹುದು ನಾವು ಬಳಸುತ್ತಿರುವ ಕ್ಯಾಲೆಂಡರ್ ನ ದಿನಗಳು ಇಂದಿಗೆ 365 ದಿನ ಮುಗಿಸಿ ಮತ್ತೆ 1ನೇ ದಿನಕ್ಕೆ ಕಾಲಿಡುತ್ತಿವೆ ಅಂತ. ಇದು ಒಪ್ಪಿಕೊಳ್ಳತಕ್ಕ ವಾದವೇ ಆದರೂ, ಸದರಿ ಇಂಗ್ಲೀಷ್ ಕ್ಯಾಲೆಂಡರ್ ನಲ್ಲಿ ಕೇವಲ ದಿನ, ವಾರ, ತಿಂಗಳಿನ ಹೆಸರುಗಳು ಮಾತ್ರ ಕಾಣಸಿಗುತ್ತವೆ. ಆ ದಿನದ ಸೂರ್ಯ & ಚಂದ್ರರ ಚಲನೆಯ ಯಾವ ವಿವರಣೆಗಳೂ ಅಲ್ಲಿ ದೊರೆಯುವುದಿಲ್ಲ. ದಿನ ಅಂತ ಕರೆಯಬೇಕಾದರೆ ಸೂರ್ಯ ಮೇಲೇಳಲೇಬೇಕು ; ಚಂದ್ರನ ಬೆಳಕು ಮರೆಯಾಗಲೇಬೇಕು ತಾನೇ ?
      ಭಾರತೀಯ ಕ್ಯಾಲೆಂಡರ್ ನಲ್ಲಿ ನಮೂದಾಗಿರುವ ತಿಥಿ ನಕ್ಷತ್ರಗಳು ಸೂರ್ಯ ಚಂದ್ರರ ಚಲನೆ-ಸ್ಥಾನ ವನ್ನಾಧರಿಸಿವೆ. ಅವರಿಂದ ತಾನೇ ನಮಗೆ ಹಗಲು ರಾತ್ರಿ !!
      ಹೀಗಾಗಿ ವೈಜ್ಞಾನಿಕವಾಗಿ ಮತ್ತು ಪ್ರಾಕೃತಿಕವಾಗಿ 
      ಮನುಷ್ಯನ ದೈನಂದಿನ ಬೆಳವಣಿಗೆಯನ್ನೂ ಸೇರಿಸಿಕೊಂಡು 
      ಇಡೀ ಮನುಕುಲಕ್ಕೆ ಯುಗಾದಿಯ ದಿನವೇ 
      ಹಳತು ಕಳೆದು ಹೊಸತು ಬರುವ ಸಂಕ್ರಮಣ ಕಾಲ. 
      ಹೊಸ ಸಂಭ್ರಮದ ಕಾಲ !!



      ಈ ಮಾಹಿತಿ ಕಳಿಸಿದ ಸ್ನೇಹಿತ ಮಾಧವ ಹೆಬ್ಬಾರ್ ಅವರಿಗೆ ಧನ್ಯವಾದಗಳು.

      2010ರ ಕ್ಯಾಲೆಂಡರ್ ಹಳತಾಯಿತು. ಆದರೆ ಆ ಕ್ಯಾಲೆಂಡರ್ ವರ್ಷದಲ್ಲಿ ನಡೆದ ಘಟನೆಗಳು ಮರೆತರೂ ಮರೆಯಲಾರದಂಥವು.

      • ದೇಶದ ಬೊಕ್ಕಸಕ್ಕಿಂತ ತಮ್ಮ ಮನೆಯ ತಿಜೋರಿಯೇ ಸಂಪತ್ತಿನ ಶೇಖರಣೆಗೆ ಸೂಕ್ತವೆಂದೆನಿಸಿದ ಮುಖ್ಯಮಂತ್ರಿ-ಚಿಕ್ಕಮಂತ್ರಿಗಳು...
      • ಬಡವರ ಕಣ್ಣೀರೊರೆಸುವ ಧ್ಯೇಯದೊಂದಿಗೆ ಅಖಾಡಕ್ಕಿಳಿದು - ಸಮಾಜಘಾತುಕ ಶಕ್ತಿಯಾಗಿ ಪರಿಣಮಿಸಿರುವ ಮಾವೋವಾದಿಗಳು & ಅವರನ್ನ ಬೆಂಬಲಿಸಿದ ಬುದ್ಧಿ ಬಲಿತ ಜುಬ್ಬಾಧಾರಿಗಳು..
      • ತರಂಗಗಳನ್ನ ಬಾಚಿಕೊಳ್ಳಲು ಮಾಧ್ಯಮ ಮಿತ್ರರ ಸಹಾಯ ಹಸ್ತ ಪಡೆದ ನಿಷ್ಕಳಂಕ ಉದ್ಯಮಿಗಳು...
      • ಮಾಧ್ಯಮದಲ್ಲಿ ದಿನವೂ ಜನರಿಗೆ ಜಾತ್ಯಾತೀತತೆ ಶಂಖ ಊದಿ, ಒಳಗೊಳಗೇ ರಾಜಕೀಯ ಪಕ್ಷಗಳಿಗೆ ನಿಷ್ಠರಾಗಿ ಪದ್ಮಪತ್ರಗಳನ್ನ ಇನಾಮಾಗಿ ಪಡೆದ ಮಹಿಳೆಯರು & ಮಹನೀಯರು...
      • ರಾಜ್ಯದ ಪತ್ರಿಕೋದ್ಯಮಕ್ಕೇ ಕಪ್ಪು ಪುಟ ಎಂಬಂತೆ ಕಿರಿ ಪತ್ರಿಕೋದ್ಯಮಿಯೊಬ್ಬರ ಬಗ್ಗೆ ಸ್ವಘೋಷಿತ ಸಾಧುಸಂಪನ್ನ - ಸಮಾಜಮುಖಿ & ಅಚ್ಚರಿ ವ್ಯಕ್ತಿತ್ವದ ಹಿರಿ ಪತ್ರಿಕೋದ್ಯಮಯೊಬ್ಬರು ಕೀಳು ಭಾಷೆ ಎಂಬ ಶಬ್ದದ Superlative ರೂಪ ತಾಳಿ ಬರೆದದ್ದು....
      • ಜನರನ್ನ ಅನಕ್ಷರತೆಯ ಕೂಪದಲ್ಲಿ ತಳ್ಳಿ, ಅವರಿಂದು ಓಟು ಕದಿಯುವ ರಾಜಕಾರಣಿಗಳ ಮಧ್ಯೆಯೂ ; ಇಂದಿಗೂ ಅದೇ ಅನಕ್ಷರತೆ - ಹಿಂದುಳಿದಿರುವಿಕೆ ಇದ್ದರೂ ಜನಪರ & ಅಭಿವೃದ್ಧಿಪರ ಕಾರ್ಯಗಳಿಂದ ಬಿಹಾರ್ ರಾಜ್ಯದಲ್ಲಿ ನಿತೀಶ್ ಕುಮಾರ್ ದಿಗ್ವಿಜಯ ಸಾಧಿಸಿದ್ದು...
      • ನರೇಂದ್ರ ಮೋದಿ, ದೇಶದ ಆಡಳಿತ ಯಂತ್ರದಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಬದಲಾವಣೆ ತಂದದ್ದು...
      • ಕ್ರಿಕೆಟ್ ದಿಗ್ಗಜ ಸಚಿನ್ ದಿನಗಳೆದಂತೆ ಹಳೆ ಚಿನ್ನಕ್ಕಿರುವ ಬೆಲೆಯಷ್ಟೇ ಮಾಗುತ್ತಿರುವುದು ...
      • ಆಪದ್ಭಾಂಧವ ಲಕ್ಷ್ಮಣ ನಿಜಕ್ಕೂ Very Very Special ಅನಿಸಿಕೊಂಡದ್ದು...
      • ಭಾರತದಲ್ಲಿ ಕ್ರಿಕೆಟ್ ಮಾತ್ರ ಕ್ರೀಡೆ ಎಂಬ ಭಾವನೆ ಅಳಿಸಲು ನಿಜ ಪ್ರಯತ್ನ ಮಾಡಿದ ಸೈನಾ ನೆಹವಾಲ್..
      • ಎ.ಆರ್.ರೆಹಮಾನ್ ಯುಗದ ನಂತರ EkDum Fressshhh Music ನೀಡಲು ಸಜ್ಜಾಗುತ್ತಿರುವ ಅಮಿತ್ ತ್ರಿವೇದಿ...

      ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಸ್ವಾರಸ್ಯಕರ ಸಂಗತಿಗಳನ್ನ ಹೆಕ್ಕಬಹುದು.





      ಸಂದು ಹೋದ ಘಟನೆ ಎಷ್ಟೇ ಕೆಟ್ಟದಾಗಿರಲಿ- ಎಷ್ಟೇ ಒಳ್ಳೆಯದಾಗಿರಲಿ ಅದರಿಂದ ಪಾಠ ಕಲಿಯದ ಹೊರತು ಆ ಘಟನೆಗೆ ನ್ಯಾಯ ದೊರೆತಂತಾಗುವುದಿಲ್ಲ... ಎಂಬ ಆಶಯದೊಂದಿಗೆ

      &

      ಹೊಸ ದಿನಕ್ಕೆ ಹಾಕಿಕೊಂಡ Resolution ಗಳು ದಿನಗಳದಂತೆ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಅದನ್ನ ಹೋಗಲಾಡಿಸಲು ಇಂದಿನಿಂದ ಪ್ರತಿದಿನ : " ಈ ದಿನವೇ ಹೊಸ ದಿನ  " ಎನ್ನೋಣ.  






       
       : ಸ್ಪರ್ಧಾರ್ಥಿ

      ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

      ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ