ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 10, 2010

ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಚುಟುಕು ಸುದ್ದಿ : ಆರೆಸ್ಸೆಸ್ - ಕಾಂಗ್ರೆಸ್ ವಾಕ್ ಸಮರ


ಸುದ್ದಿಯ ಒಳನೋಟ :

  • ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಮತ್ತು ಮುಸ್ಲಿಂ ನಾಯಕರು ಬಯಸಿದ್ದ ರಾಷ್ಟ್ರವನ್ನು ಒಡೆಯುವ ಹುನ್ನಾರದ ವಿರುದ್ಧ ಹಿಂದೂಗಳಲ್ಲಿ ಐಕ್ಯತೆಯನ್ನು ಮೂಡಿಸಿ ಭಾರತೀಯ ಸಂಸ್ಕೃತಿ ಜಗದಗಲ ಹಬ್ಬಬೇಕೆನ್ನುವ ಸದುದ್ದೇಶದಿಂದ 1925ರ ವಿಜಯದಶಮಿಯಂದು ಡಾ. ಕೇಶವ ಬಲಿರಾಮ ಹೆಡಗೆವಾರರು ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು.
  • ಸಂಘ ಸ್ಥಾಪನೆಗೂ ಮುಂಚೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಕೊಡುವ ನಿಟ್ಟಿನಲ್ಲಿ & ರಾಷ್ಟ್ರಾಭಿಮಾನ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಂದೇ ಮಾತರಂ ಬರೆದ ಬಂಕಿಂ ಚಂದ್ರ ಚಟರ್ಜಿ ಅವರ ಉಪದೇಶಗಳನ್ನ ಪಾಲಿಸುವ ಉದ್ದೇಶದಿಂದ ( ಆನಂದ ಮಠ ಕಾದಂಬರಿ ಜ್ಞಾಪಿಸಿಕೊಳ್ಳಿ - ಮುಖ್ಯವಾಗಿ ಕಾದಂಬರಿಯಲ್ಲಿ  ತಿಳಿಸಲಾಗಿರುವ ಸ್ವಾತಂತ್ರ್ಯ ಸಾಧನೆಯ ಮಾರ್ಗವನ್ನ ಜ್ಞಾಪಿಸಿಕೊಳ್ಳಿ ) ಪ್ರಾರಂಭವಾದ ಅನುಶೀಲನ್ ಸಮಿತಿ & ಅದೇ ಆತ್ಮ ಹೊಂದಿದ್ದ ಜುಗಾಂತರ್ (ಯುಗಾಂತರ್) ಎಂಬೆರಡು ಸಂಸ್ಥೆಗಳಿಗಾಗಿ ಹೆಡಗೆವಾರ್ ಸದಸ್ಯರಾಗಿದ್ದರು.
  • ಕೆಲವರು ಈ ವಿಪರ್ಯಾಸವನ್ನ Quote ಮಾಡಬಹುದು. : 
ಕಾಂಗ್ರೆಸ್ ನ ಅಧೀಕ್ಷಕಿಯನ್ನ ಸಿ.ಐ.ಎ. ಏಜೆಂಟ್ ಎಂದು ನಿಂದಿಸಿದ್ದಾರೆ ಆರೆಸ್ಸೆಸ್ ಸುದರ್ಶನ್, ಆದರೆ ಹೆಡಗೆವಾರ್ ಅವರು ಸಂಘ ಸ್ಥಾಪಿಸುವ ಮುಂಚೆ ಕೆಲದಿನ ಕಾಂಗ್ರೆಸ್ ಸದಸ್ಯರಾಗಿದ್ದರು. 
ಆದರೆ  ಅಂದಿನ ಕಾಂಗ್ರೆಸ್ಸೇ ಬೇರೆ. ಇಂದಿನ ಕಾಂಗ್ರೆಸ್ಸೇ ಬೇರೆ. ಅಂದಿನ ಕಾಂಗ್ರೆಸ್ ಏಕೈಕ ಉದ್ದೇಶ ಹೊಂದಿದ್ದು, ಅದು ಸ್ವಾತಂತ್ರ್ಯ ಸಾಧನೆಯಾಗಿತ್ತು. ಇಂದಿನ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದ ಕಾಂಗ್ರಸ್ ಪಕ್ಷದ ಮುಂದುವರೆದ ಭಾಗ ಅಂತ ಯಾರಾದರೂ ಅಂದುಕೊಂಡಿದ್ದಲ್ಲಿ ಅವನಂತಹ ಮೂರ್ಖನೇ ಯಾರೂ ಇಲ್ಲ. ಹಾಗೇನಾದರೂ ಯಾರಾದರೂ ಪ್ರತಿಪಾದಿಸ ಹೊರಟಲ್ಲಿ, ದೇಶಕ್ಕಾಗಿ ತಮ್ಮ ಪ್ರಾಣವನ್ನ ಬಲಿದಾನಗೈದ ಹುತಾತ್ಮರ ಆತ್ಮಕ್ಕೆ ದ್ರೋಹ ಬಗೆದ ಹಾಗಲ್ಲವೇ ?
  • ಅಂದು ದೇಶವನ್ನ ವಿದೇಶೀ ಶಕ್ತಿಯಿಂದ ವಿಮೋಚನೆಗಾಗಿ ಕಾರ್ಯನಿರ್ವಹಿಸಿದ ಸಂಘ, ಇಂದು ಕಾಲಕ್ಕೆ ತಕ್ಕಂತೆ ಬದಲಾಗಿದ್ದು ತನ್ನ ಕಾರ್ಯಚಟುವಟಿಕೆಗಳ ವಿಸ್ತಾರಗಳನ್ನ ವಿಸ್ತರಿಸಿದೆ.
  • ಮುಖ್ಯವಾಗಿ ಸಮಾಜ ಸೇವೆ, ಸಂತ್ರಸ್ತರ ಪುನರ್ವಸತಿ, ಶಿಸ್ತು ಬದ್ಧ ಸಂಘಟನೆ, ಹಿಂದೂ ಸಂಸ್ಕೃತಿ ಪುನರುತ್ಥಾನ ..  ವಲಯಗಳಲ್ಲಿ ಸಂಘ ವ್ಯಾಪಿಸಿದೆ.
  • ಶಿಸ್ತಿಗೆ ಹೆಸರುವಾಸಿಯಾದ ಆರ್.ಎಸ್.ಎಸ್. ನ ಸಾವಿರಾರು ಕಟಿಬದ್ಧ ಸ್ವಯಂ ಸೇವಕರು ದೇಶದ ಮೂಲೆ ಮೂಲೆಗಳಲ್ಲಿ ನಿಸ್ವಾರ್ಥ ಸೇವೆಯನ್ನು ನಡೆಸುತ್ತಿದ್ದಾರೆ. ಗುಜರಾತಿನಲ್ಲಿ 2002ರಲ್ಲಿ ಭೂಕಂಪ ಸಂಭವಿಸಿದಾಗ, 2004 ರಲ್ಲಿ ಸುನಾಮಿ ದಾಂಗುಡಿ ಇಟ್ಟಾಗ.... ಹೀಗೆ ದೇಶಕ್ಕೆ ಆಪತ್ತು ಎದುರಾದಾಗಲೆಲ್ಲಾ ಗಣವೇಶಧಾರಿಗಳು ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ಜಲಪ್ರಳಯವಾಗಿ ಸೂರು ಕಳೆದುಕೊಂಡವರಿಗೆ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದ ಹತ್ತಿರ 77 ಮನೆಗಳನ್ನು ನಿರ್ಮಿಸಿ ಕಳೆದ ವಿಜಯದಶಮಿಯಂದು ಹಂಚಿದ್ದಾರೆ. (ಇನ್ನೂ ಹೆಚ್ಚಿನ ಮನೆಗಳನ್ನು ನಿರ್ಮಿಸುವ ಯೋಜನೆಯಿಟ್ಟುಕೊಂಡಿದ್ದಾರೆ.) ಸ್ವಲ್ಪ ಕೆಲಸ ಮಾಡಿ, ಜಾಸ್ತಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲವು NGO ಗಳು ಸಂಘವನ್ನ ನೋಡಿ ಕಲಿಯಬೇಕಿರುವುದು ಬಹಳವಿದೆ.
  • 85 ವರ್ಷಗಳ ಇತಿಹಾಸವಿರುವ ಆರ್.ಎಸ್.ಎಸ್. ಹಲವಾರು ಕ್ಷೇತ್ರಗಲ್ಲಿ ಅಂಗ ಸಂಸ್ಥೆಗಳನ್ನು ಹೊಂದಿದೆ. 
  1. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಭಾರತಿ
  2. ವಿದ್ಯಾರ್ಥಿಗಳ ಸಂಘಟನೆಗಾಗಿ ಎ.ಬಿ.ವಿ.ಪಿ.
  3. ರಾಜಕೀಯದಲ್ಲಿ ಜನಸಂಘ ( ಜನಸಂಘ ಈಗ ಅಸ್ತಿತ್ವದಲ್ಲಿಲ್ಲ. ಆದರೆ ಮುಂದುವರೆದು ಬಿ.ಜೆ.ಪಿ. ಹೆಸರಿಟ್ಟುಕೊಂಡ ಮೇಲೆ, ಜನಸಂಘದ ಅನೇಕ ತತ್ವಗಳನ್ನ ಮರೆತಿದೆ ಅನ್ನುವುದು ಎಲ್ಲರಿಗೂ ಮನವರಿಕೆಯಾಗಿ, ಬಿ.ಜೆ.ಪಿ. ಆರೆಸ್ಸೆಸ್ Ideology ಗಳನ್ನ ಬೆಂಬಲಿಸುವ ಪಕ್ಷ ಮಾತ್ರವಾಗಿ ಹೋಗಿದೆ )
  4. ವಿಚಾರವಂತರಿಗಾಗಿ ಭಾರತೀಯ ವಿಚಾರ ಕೇಂದ್ರ
  5. ಕಲಾ ರಂಗಕ್ಕಾಗಿ ಸಂಸ್ಕಾರ ಭಾರತಿ
  6. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳ ಮುದ್ರಣಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್
  7. ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿಗಾಗಿ ಸ್ವದೇಶಿ ಜಾಗರಣ ಮಂಚ್
  8. ಐ.ಟಿ. ಟೆಕ್ಕಿಗಳಲ್ಲಿ ರಾಷ್ಟ್ರಜಾಗೃತಿ ಮೂಡಿಸಿ ಅವರ ಸಹಾಯವನ್ನೂ ಸಂಘಟನೆಗೆ ಪಡೆಯುವ ನಿಟ್ಟಿನಲ್ಲಿ ರಚಿತವಾಗಿರುವ IT ಮಿಲನ್... 
ಈ ರೀತಿಯಾದಂತಹ ಹಲವಾರು ಸಂಘ ಪರಿವಾರಗಳಿಂದ ಕೂಡಿಕೊಂಡು ತಾಯಿ ಭಾರತಿಗೆ ನಿಷ್ಕಲ್ಮಶ ಸೇವೆಯನ್ನ ಆರ್.ಎಸ್.ಎಸ್. ಮಾಡುತ್ತಿರುವುದನ್ನ ನಾವೆಲ್ಲ ಒಪ್ಪಿಕೊಳ್ಳಬೇಕು.

    • ಹೆಮ್ಮರವಾಗಿ ಬೆಳೆದುನಿಂತ ಆರ್.ಎಸ್.ಎಸ್. ಮೇಲಿಂದ ಮೇಲೆ ಸಂಘ ವಿರೋಧಿಗಳಿಂದ ಸಂಘರ್ಷಗಳನ್ನೂ ಎದುರಿಸಿದೆ.೧೯೪೮ ರಲ್ಲಿ ಗಾಂಧಿ ಹತ್ಯೆ ಮಾಡಿದೆ ಎಂದು ಸಂಘವನ್ನು ಅಂದಿನ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಗಾಂಧಿ ಹತ್ಯೆಗೂ ಸಂಘಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ಸರ್ಕಾರ ತಲೆ ತಗ್ಗಿಸುವಂತಾಯಿತು.
    • ಇಲ್ಲಿಯವೆರೆಗೆ ಬ್ರಿಟಿಷ್ ರಾಜ್ 01 ಸಾರಿ & ಭಾರತ ಸರ್ಕಾರ 02 ಬಾರಿ ಸಂಘಟನೆಯನ್ನ ನಿಷೇಧಿಸಿತ್ತು. 
    • ೧೯೯೮ ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿನ ನಿರೀಕ್ಷಿತ  ವಿರೋಧಗಳನ್ನು ಲೆಕ್ಕಿಸದೆ ಎರಡನೆಯ ಬಾರಿಗೆ ಪೋಖ್ರಾನ್ ಅಣು ಪರೀಕ್ಷೆಯನ್ನು ನಡೆಸಿದ್ದು, ೧೯೯೯ ರಲ್ಲಿ ಪಾಕಿಸ್ತನ ಕದನಕ್ಕೆ ಇಳಿದಾಗ ಅದನ್ನು ಹೊಡೆದೋಡಿಸಿದ್ದು, ಮುಂದೆ ಅದೇ ಪಾಕಿಸ್ತಾನದೊಂದಿಗೆ ಸ್ನೇಹ ಬಯಸಿ 'ಸ್ನೇಹಕೂ ಭದ್ಧ ಸಮರಕೂ ಸಿದ್ಧ' ಎಂದು ಹೇಳಿದ್ದು, ನಮ್ಮ ದೇಶದೊಂದಿಗೆ ಕಾಲುಕೆದರಿ ಜಗಳವಾಡಿ ಮಾತು ಬಿಟ್ಟಿದ್ದ ಚೀನಾದೊಂದಿಗೆ ಸ್ನೇಹ ಹಸ್ತ ಚಾಚಿದ್ದು, ಅಟಲ್ ಬಿಹಾರಿ ವಾಜಪೇಯಿಯವರು. ಇಂತಹ ಅಪ್ರತಿಮ ರಾಜಕಾರಣಿಯ ಹಿನ್ನೆಲೆ ಆರ್.ಎಸ್.ಎಸ್. ಸಂಘಟನೆಯ ಶಿಸ್ತಿನಲ್ಲಿ ಮಿಳಿತವಾಗಿರುವುದು ಸುಳ್ಳಲ್ಲ.
    • ಗುಜರಾತ್ ರಾಜ್ಯವನ್ನ ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ದು ರಾಜ್ಯವನ್ನ ಭಾರತದ ನಂ.1 ರಾಜ್ಯವನ್ನಾಗಿಸಿರುವ ನರೇಂದ್ರ ಮೋದಿ ಕೂಡ ಆರೆಸ್ಸೆಸ್ ಅಂಗಳದಲ್ಲಿ ಆಡಿ ಬೆಳೆದವರು.
    • ಪ್ರತಿ ಧರ್ಮದವರೂ ತಮ್ಮ ಧರ್ಮದ ಏಳಿಗೆಗೆ, ಪುಸರುತ್ಥಾನಕ್ಕೆ .. ರಕ್ಷಿಸುವ ಒಂದು ಶಾಖೆಯನ್ನ ಹೊಂದಿರುವ ಹಾಗೆ ಹಿಂದೂ ಧರ್ಮದ ಶಾಖೆಯಾಗಿ ಆರೆಸ್ಸೆಸ್ ಇದೆ. ಮುಸ್ಲಿಂರೂ ತಮ್ಮ ಧರ್ಮಕ್ಕಾಗಿ ಸಂಘಟಿತರಾಗಿದ್ದಾರೆ. ಅಂತೆಯೇ ಕ್ರಿಶ್ಚನ್ನರೂ ಕೂಡ. ಈ ವಾದವನ್ನ ಪುರಸ್ಕರಿಸದೇ ಅನೇಕ ಜನ ಆರೆಸ್ಸೆಸ್ ಅನ್ನ ದೇಶದಲ್ಲಿ ಶಾಂತಿ ಕದಡುವ ಸಂಸ್ಥೆ ಎಂಬಂತೆ ಬಿಂಬಿಸಿ ತಮ್ಮ ಬುದ್ದಿಮಟ್ಟದ ಆಳವನ್ನ (?) ತೋರಿಸಿಕೊಡುತ್ತಿದ್ದಾರೆ. ಬರೀ ಶಾಂತಿಯಲ್ಲ ದೇಶವನ್ನೇ ಕಲಕುವ ಕೆಲಸ ಮಾಡಿದವರ ಬಗ್ಗೆ ಇಂಥವರ ದಿವ್ಯಮೌನ ಪ್ರಶ್ನಾರ್ಹ.
    • ಅಜ್ಮೇರ್ ದರ್ಗಾದಲ್ಲಿ ನಡೆದ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಆರೆಸ್ಸೆಸ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಸತ್ಯ ಏನೇ ಇರಲಿ : ಪ್ರಕರಣಕ್ಕೆ ಕಾಂಗ್ರೆಸ್ ನೀಡುತ್ತಿರುವ ಪ್ರಚಾರ ಮಾತ್ರ ರಾಜಕೀಯ ಪ್ರೇರಿತ ಅನ್ನುವುದನ್ನ ಹಿಂದೂ ಮಾತ್ರವಲ್ಲ ಭಾರತೀಯರೆಲ್ಲ ಒಪ್ಪಿಕೊಳ್ಳಲೇಬೇಕು.


    : ಸಂಘದ  ಬಗ್ಗೆ, ಜಾತಿ - ಧರ್ಮಗಳ ಭೇದವಿಲ್ಲದೇ ನಾವೆಲ್ಲ ಒಪ್ಪಿಕೊಳ್ಳುವ
    ಭಾರತದ ಇಬ್ಬರು ಅಪ್ರತಿಮ ನಾಯಕರ ಅಭಿಪ್ರಾಯಗಳಿವು :


    ಡಾ | ಬಿ.ಆರ್.ಅಂಬೇಡ್ಕರ್ - " This is the first time that I am visiting the camp of Sangh volunters. I am happy to find absolute equality between Savarniyas (Upper cast) and Harijans (Lower cast) without any one being aware of such difference existing." When he asked Dr Hedgewar whether there were any untouchables in the camp, he replied that there are neither "touchables" nor "untouchables" but only Hindus."

    ಮಹಾತ್ಮಾ ಗಾಂಧೀಜಿ - "When i visited the RSS Camp. I was very much surprised by your discipline and absence of untouchablity "




     
     : ಪವನ್








    .

    No comments:

    ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

    ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ