ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 23, 2010

ಸ್ಟಾಫ್ ಸೆಲೆಕ್ಷನ್ ಕಮೀಷನ್ - DEO ಪರೀಕ್ಷೆ - 2009



ಸ್ಟಾಫ್ ಸೆಲೆಕ್ಷನ್ ಕಮೀಷನ್ - DEO ಪರೀಕ್ಷೆ - 2009
{ ಅತ್ಯಮೂಲ್ಯ ಉತ್ತರ ಪತ್ರಿಕೆ : 01 }
 

  • ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ವಯಸ್ಸಿನಲ್ಲಿ ಯಾವುದೇ ಮೇಲ್ಮಿತಿಯಿಲ್ಲ. ಕೆಳಮಿತಿ ಕನಿಷ್ಟ 35 ವರ್ಷವಾಗಿರಬೇಕು.
  • ಜವಾಹರ್ ರೋಜಗಾರ್ ಯೋಜನೆಯ ಜವಾಬ್ದಾರಿ ಗ್ರಾಮಪಂಚಾಯತಿಗೆ ಸೇರಿದ್ದು.
  • ಲೋಕಸಭೆ ಅಧಿವೇಶನ ನಡೆಯಲು ಇರಬೇಕಾದ ಕೋರಂ - ಒಟ್ಟು ಸದಸ್ಯ ಬಲದ 1/10
  • ಪ್ರಜಾಪ್ರಭುತ್ವದಲ್ಲಿ ' ಸಮಾನರಲ್ಲಿ ಮೊದಲಿಗ = First Among Equals ' ಎಂದು ಕರೆಸಿಕೊಳ್ಳುವ ವ್ಯಕ್ತಿ - ರಾಷ್ಟ್ರಪತಿ. ( ಇದೇ ಕಾರಣಕ್ಕೆ ಅವರನ್ನು ದೇಶದ ಪ್ರಥಮ ಪ್ರಜೆ ಎಂದು ಕರೆಯಲಾಗುತ್ತದೆ )
  • ಭಾರತದ ಸಿಲಿಕಾನ್ ವ್ಯಾಲಿ - ಬೆಂಗಳೂರು
  • ' ಇಂಡಿಯಾ ವಿನ್ಸ್ ಫ್ರೀಡಂ ' ಪುಸ್ತಕ ಬರೆದವರು - ಮೌಲಾನಾ ಅಬುಲ್ ಕಲಾಮ್ ಆಜಾದ್
  • ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯನ್ನ ಡಿಸೆಂಬರ್ 10ರಂದು ಆಚರಿಸಲಾಗುತ್ತದೆ.
  • 1959ರವರೆಗೆ ಪಾಕಿಸ್ತಾನದ ರಾಜಧಾನಿ ಕರಾಚಿ ಆಗಿತ್ತು.
  • ರಿಸರ್ವ್ ಬ್ಯಾಂಕಿನ FERA ( Foreign Exchange Regulation Act ) ಈಗ FEMA ( Foreign Exchange Management Act ) ಎಂದು ಬದಲಾಗಿದೆ.
  • ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಜಾರಿಗೆ ಬಂತು.
  • 2010ರ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯ ವಿಜೇತರು - ಭಾರತ & ಕೊರಿಯಾ ( ಜಂಟಿ ). 2009ರಲ್ಲಿ ಭಾರತ ಮಲೇಷಿಯಾ ವಿರುದ್ಧ ಜಯ ಸಾಧಿಸಿತು.
  • 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ - ಶ್ರೀಲಂಕಾ - ಬಾಂಗ್ಲಾದೇಶ ಒಟ್ಟುಗೂಡಿ ಆಯೋಜಿಸುತ್ತಿವೆ.
  • ಹಾಲಿ ಇಸ್ರೋ ಮುಖ್ಯಸ್ಥರು - ಕೆ.ರಾಧಾಕೃಷ್ಣನ್ ( ಹಿಂದಿನವರು : ಮಾಧವನ್ ನಾಯರ್ )
  • Gross National Product - Net National Product = Depriciation
  • My Experiments With Truth ಎಂಬ ಆತ್ಮಕಥನ ಬರೆದವರು - ಮಹಾತ್ಮಾ ಗಾಂಧೀಜಿ
  • ಭಾರತದ ಪ್ರಮುಖ ಮರುಭೂಮಿಯ ನದಿ - ಲೂನಿ
  • ನಾಗಾರ್ಜುನಸಾಗರ ಜಲಾಶಯ ಕೃಷ್ಣಾ ನದಿಗೆ ಅಡ್ಡಲಾಗಿ ಆಂಧ್ರಪ್ರದೇಶದಲ್ಲಿ ಕಟ್ಟಲಾಗಿದೆ.
  • Stagnation & Inflation ಎರಡೂ ಒಟ್ಟಿಗೆ ಸಂಭವಿಸಿದರೆ ಅದನ್ನ Stagflation ಎಂದು ಕರೆಯುತ್ತಾರೆ.
  • ರಾಜಸ್ಥಾನದ ಖೇತ್ರಿ ನಗರ ತಾಮ್ರದ ಉದ್ದಿಮೆಗೆ ಹೆಸರುವಾಸಿ. ಅಲ್ಲಿ Hindustan Copper Limited ಕಾರ್ಖಾನೆ ಇದೆ.
  • ಸಾಂಚಿ ಸ್ಥೂಪ ಇರುವ ಸಾಂಚಿ ನಗರ ಮಧ್ಯಪ್ರದೇಶದಲ್ಲಿದೆ.
  • ಅಕ್ಬರನ ಪಟ್ಟಾಭಿಷೇಕವಾದಾಗ ಅವನಿಗೆ 13 ವರ್ಷ.
  • ಕೇರಳ ರಾಜ್ಯಕ್ಕೆ ಅಂಟಿಕೊಂಡಿರುವ ಕರಾವಳಿಗೆ ಮಲಬಾರ್ ಎಂದು ಹೆಸರು. ( ತಮಿಳುನಾಡು - ಕೋರಮಂಡಲ್ ; ಕರ್ನಾಟಕ - ಕೆನರಾ ; ಮಹಾರಾಷ್ಟ್ರ - ಕೊಂಕಣ್ )
  • ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಬಂಗಾರ ನಿಕ್ಷೇಪಗಳನ್ನ ಹೊಂದಿದೆ.
  • " ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು. ನಾನು ಅದನ್ನ ಪಡೆದೇ ತಿರುತ್ತೇನೆ. " ಎಂದು ಗುಡುಗಿದವರು ತಿಲಕ್
  • ( minus 40 degree ) ಈ ಮಾಪನ ಫ್ಯಾರನ್ ಹೀಟ್(F) ಮತ್ತು ಸೆಲ್ಸಿಯಸ್(C) ಎರಡೂ ಮಾಪನಗಳ ಮೇಲೆ ಒಂದೇ ಆಗಿ ಓದಲ್ಪಡುತ್ತದೆ. ಮಾಪನ ಪರಿವರ್ತನಾ ಸೂತ್ರ ಹೀಗಿದೆ : C = (F-32 ) * 5/9



: ಉತ್ತರಚೋರ







.

1 comment:

shaantha sagara said...

thank you for sending information like this could you please send some more gk information

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ